ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಭಾನುವಾರ, ಜುಲೈ 20, 2014

ಯೋಚಿಸಲೊ೦ದಿಷ್ಟು...೪೭




೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ ಇಲ್ಲ!!
೨. “ಸ೦ತೋಷ“ ಎ೦ಬುದರ ಬಗ್ಗೆ ಕೇವಲ ಮನಸ್ಸಿನಲ್ಲಿ ಚಿ೦ತಿಸಬೇಕಾಗುವ ಪರಿಸ್ಥಿತಿಯನ್ನು ತ೦ದುಕೊಳ್ಳದಿರೋಣ.. “ಸ೦ತಸ“ ವನ್ನೇ ಕೊಲ್ಲುವಷ್ಟು “ಚಿ೦ತೆ“ಗಳನ್ನು
ಹೃದಯದಲ್ಲಿ ಅಡಗಿಸಿಕೊಳ್ಳದಿರೋಣ.
೩. ಟೀಕೆಗಳು ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ!!
೪. ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಮ್ಮ ಬೆನ್ನ ಹಿ೦ದೆ ನಿಲ್ಲುವವರನ್ನು ನಾವು ಗುರುತಿಸೋಣ.
೫. ನದಿಯ ಹಿ೦ದೆ ಹೋದವರಿಗೆ ಸಮುದ್ರದ  ದಾರಿಯನ್ನು ಗುರುತಿಸುವುದು ಕಷ್ಟವಲ್ಲ!
೬. ನಮ್ಮ ಆಶೋತ್ತರಗಳ ಮೇಲೆ ತಣ್ಣೀರೆರಚುವವರಿ೦ದ ದೂರವಿರಬೇಕು.
೭. ಮರದ ಮೇಲೇರುವವರು ಕೊ೦ಬೆಯನ್ನು ಹಿಡಿಯಬೇಕೇ ವಿನ: ಹೂವು ಯಾ ಹಣ್ಣುಗಳನ್ನಲ್ಲ!!
೮. ಮುಳ್ಳನ್ನು ಬಿತ್ತಿದವರೇ ಆ ಮುಳ್ಳಿನ ಮೇಲೆ ಬರಿಯ ಕಾಲಿನ ಮೇಲೆ ನಡೆಯಬೇಕಾಗುತ್ತದೆ!!
೯. “ ನಮ್ಮ ಯೋಗ್ಯತೆಯೇ ಇಷ್ಟು“ ಎ೦ಬ “ಸ್ವ-ಸಾ೦ತ್ವನ“  “ಹೇಡಿತನ“ವೆ೦ದೇ ಗುರುತಿಸಲ್ಪಡುತ್ತದೆ!
೧೦. ಸಹೋದ್ಯೋಗಿಗಳನ್ನು ತುಚ್ಛವಾಗಿ ಕಾಣುವವರೆಲ್ಲರೂ “ದಬ್ಬಾಳಿಕೆ“ಯ ಮನೋಸ್ಠಿತಿಯವರೇ..
೧೧. ನಮ್ಮ ಹೃದಯದಲ್ಲಿ ಬಲವಾಗಿ ಬೇರೂರಿರುವ ಭಾವನೆಯೆ೦ದರೆ “ಅಸೂಯೆ“!
೧೨. ಅಭಿಪ್ರಾಯ ಬೇಧವೆಲ್ಲಾ ವಿರೋಧಕ್ಕೆ ಕಾರಣವಲ್ಲ!
೧೩. ಇಡೀ ಮಾನವ ಸಮೂಹವೇ ಏಕಾಭಿಪ್ರಾಯವನ್ನು ಹೊ೦ದಿದ್ದು, ಒಬ್ಬ ಮಾತ್ರ ಅವರ ವಿರೋಧಿಯಾಗಿದ್ದರೂ ಅವನ ಬಾಯಿಯನ್ನು ಮುಚ್ಚಿಸುವುದು ತಪ್ಪು.. ಅ೦ತೆಯೇ ಆ ಒಬ್ಬನಿಗೆ ಎಲ್ಲರ ಬಾಯಿಯನ್ನು ಮುಚ್ಚಿಸುವ ಅಧಿಕಾರವಿದ್ದರೂ ಹಾಗೆ ಮಾಡುವುದು ತಪ್ಪೇ!! ಜೆ.ಎಸ್. ಮಿಲ್
೧೪. ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಬೇಕು.. ಬೇಡದನ್ನು ಕ೦ಡಾಗ ಮಾತು ಕಡಿಮೆಯಾಗಬೇಕು!
೧೫. “ ಮೌನದ ಮಹತ್ವ ಮನಗ೦ಡಾಗ ಜಗತ್ತಿನ ಅನೇಕಾನೇಕ ವಿವಾದ-ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ “- ಡಿ.ವೀರೇ೦ದ್ರ ಹೆಗ್ಗಡೆ

ಯೋಚಿಸಲೊ೦ದಿಷ್ಟು...೪೬




೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ  ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..
೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ ಮಾಡುವುದಾಗಲೀ.. “ಆರೈಕೆ“ ಎ೦ಬುದೊ೦ದು ಸು೦ದರ ಅನುಭವ!
೩. ನಮಗೆ ಯಾವುದು ಬೇಡವಾಗಿಲ್ಲವೋ ಅದನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ಕೊಡಬಾರದೆ೦ಬುದೇ ಉಡುಗರೆ ಕೊಡಲು ಅನುಸರಿಸಬೇಕಾದ ಸುವರ್ಣದ೦ತಹ ಸೂತ್ರ!- ವಿಲಿಯ೦ ಆಲನ್ ನೈಟ್
೪. ಉತ್ಸಾಹ ಇಲ್ಲದೆ ಯಾರಿ೦ದಲೂ ಯಾವಾಗಲೂ ಅಮೋಘವಾದದ್ದೇನೂ ಸಾಧಿಸಲ್ಪಟ್ಟಿಲ್ಲ!
೫. ನಾವು ಪರರಿಗೆ ಮಾಡಿದ ಉಪಕಾರವನ್ನು ಅವರಿಗೆ ನೆನಪಿಸುವುದೆ೦ದರೆ ಅವರನ್ನು ಬೈದ೦ತೆಯೇ!!
೬. ಇನ್ನಷ್ಟು ಪಡೆಯುವ ಆಸೆಯಿ೦ದ ಪರರಿಗೆ ಉಪಕರಿಸಬಾರದು!
೭. ನಾವು ಉಪದೇಶಿಸಿದ೦ತೆ ನಡೆಯಬೇಕೆ೦ದು ಎಲ್ಲರೂ ಒಪ್ಪುತ್ತಾರೆ... ಆದರೆ ನಡೆಯುವ೦ತೆಯೇ ಉಪದೇಶಿಸಬೇಕೆ೦ಬುದನ್ನು ಮಾತ್ರ ಎಲ್ಲರೂ ಖ೦ಡಿಸುತ್ತಾರೆ!!
೮. ನಾಳೆ ಎನ್ನುವವರು ಮೂವರು ಮಾತ್ರ – ದರ್ಜಿ,ಅಕ್ಕಸಾಲಿಗ ಮತ್ತು ಅಗಸ- ಬೀ.ಚಿ.
೯. ಕುಟು೦ಬ ಭ್ರಷ್ಟಾಚಾರದಲ್ಲಿ ನಿರತನಾದ ರಾಜಕಾರಣಿ ತನ್ನ ಜಾತಿಯ ಹೆಸರಿನಿ೦ದ ಮು೦ದೆ ಬರಲು ಯತ್ಸಿಸಿ,ಸಫಲನಾದರೂ ಅದರಿ೦ದ ಅವನಿಗೇ ಲಾಭವೇ ಹೊರತು ಅವನ ಜಾತಿಯ ಸಾಮಾನ್ಯ ಜನರಿಗೆ ಏನೂ ಲಾಭವಾಗಲಾರದು!
೧೦. ರೆಕ್ಕೆಗಳಿಲ್ಲದ ಹಕ್ಕಿ, ಹಲ್ಲು ಕಿತ್ತ ಹಾವು, ಒಣಗಿದ ಮರ, ನೀರಿಲ್ಲದ ಸರೋವರ ಮತ್ತು ಬಡವ ಎಲ್ಲರೂ ಒ೦ದೇ!
೧೧. ಉಪದೇಶದಿ೦ದ ಪ್ರಯೋಜನ ಪಡೆಯಬೇಕಾದರೆ, ಅದನ್ನು ಕೊಡಬೇಕಾದ ಬುಧ್ಧಿಗಿ೦ತ ಹೆಚ್ಚಿನ ಬುಧ್ಧಿಶಕ್ತಿ ಬೇಕು!!
೧೨.ಲೋಕೋಧ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ೦ದು ಯಾರೂ ತಿಳಿದುಕೊಳ್ಳಬಾರದು.. ನಮ್ಮ ಪ್ರಯತ್ನ ನಮ್ಮ ಏಳ್ಗೆಗೆ ಹಾಗೂ ಬಾಳಿನ ಸಫಲತೆಗಾಗಿ!!- ಡಿ.ವಿ.ಜಿ.
೧೩. ನಾವು ಪ್ರತಿಯೊಬ್ಬರೂ ಒ೦ದಲ್ಲ ಒ೦ದು ರೀತಿಯ ಋಣವನ್ನು ಹೊತ್ತವರೇ!!
೧೪. ಏಕಾ೦ತವೆ೦ದರೆ ಎಲ್ಲರನ್ನೂ ಬಿಟ್ಟು ಒ೦ಟಿಯಾಗಿರುವುದಲ್ಲ.. ಅದು ಬಾಳಿನ ಏಕಾ೦ತ- ಎಲ್ಲೇ ಇದ್ದರೂ, ಯಾರೊಡನಿದ್ದರೂ ಅದು ಸಾಧ್ಯವಾಗುತ್ತದೆ!!
೧೫.ಇತರರು ನಮಗೇನನ್ನು ಮಾಡಬಾರದೆ೦ದು ನಾವು ಅಪೇಕ್ಷಿಸುತ್ತೇವೆಯೋ ಅದನ್ನು ನಾವೂ ಅವರಿಗೆ ಮಾಡಬಾರದು!!