ಕೃತಿ:ಪುರಂದರದಾಸರು
ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ
ನರರೊಳಗೇ ಪಾಮರನೋ ನಾನೂ
ನರರೊಳಗೇ ಪಾಮರನೋ ನಾನಿಹ
ಪರಕೆ ಸಾಧನ ವರಿಯೇ..
ಶರಣು ಹೊಕ್ಕೆನು ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆಯ ಎನಗಿತ್ತು
ಪರಾಕು ಮಾಡದೇ..
ಜಪವನರಿಯೆನು ತಪವನರಿಯೆನು
ಉಪವಾಸ ವೃತಗಳ ನಾನರಿಯೆ ಶ್ರೀಹರಿಯೆ
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಾಹತವ ಮಾಡೋ ಅಪಾರಮಹಿಮನೆ
ಪರಾಕು ಮಾಡದೇ..
ಕರಿಯ ರಕ್ಷಿಸಿ ದ್ರೌಪದಿ ಮೊರೆ ಆಲಿಸಿ
ತರಳಗೊಲಿದು ನೀ ಪೊರೆದೆ ದಯದಿ
ಸಿರಿಯರಸನೇ ನಿನ್ನ ಸರಿಯಾರೊ ಕಾಣೆನು
ಕರುಣಿಸಯ್ಯ ಶ್ರೀ ಪುರಂದರ ವಿಠಲ
ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಂಗಳ ಕ್ಷಮಿಸೋ
ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ